ಮುಗಿಲ ಜೇನು

ಮರದ ಕೊಂಬೆಗೆ ಒಂದು
ತೊಟ್ಟಿಲವ ಕಟ್ಟಿಹುದು
ತೊಟ್ಟಿಲಲಿ ಆಡುತಿದೆ
ಕೈಕಾಲುಗಳ ಬಿಚ್ಚಿ
ಈಗ ಕಣ್ದೆರೆದಿರುವ
ಹೊಚ್ಚ ಹೊಸ ಎಳೆಯ ಕೂಸು ||

ಮರದ ಮೇಲ್ಬದಿಯಲ್ಲಿ
ಮರಜೇನು ಹುಟ್ಟಿಹುದು
ದೇವರಾಯನ ಕರುಣೆ
ಯಿಂದ ಹುಟ್ಟಿಗೆ ಸಣ್ಣ
ಹುಗಿಲು ಕೊರೆದಿಹುದಲ್ಲಿ
ಹನಿಯುತಿದೆ ಸವಿಜೇನು
ಒಂದೊಂದು ಹನಿಯಾಗಿ
ಧಾರೆಯಾಗಿಳಿಯುತಿದೆ
ಹನಿಗಡಿದು ಆ ಧಾರೆ
ಮತ್ತೆ ಮೇಲಕೆ ಏರಿ
ಹನಿಗೊಂಡು ಇಳಿಯುತಿಹುದು||

ತೂಗುತಿದೆ ತೊಟ್ಟಿಲವು
ಬಿಡದೆ ತೂಗಲು ಬೇಕು
ತೂಗು ನಿಂತರೆ ಹಸುಳೆ
ಕಿರಚಿ ಕೂಗುವದೆನಿತೊ.
ಹುಟ್ಟಿರುವ ರೆಂಬೆಯದು
ಅಂತರದಿ ತೇಲುತಿದೆ
ರೆಂಬೆಯಲಿ ಹುಟ್ಟಿಹುದು

ಹುಟ್ಟಿನಲಿ ಜೇನಿಹುದು
ಜೇನಿನಲಿ ಸವಿಯಿಹುದು
ಸವಿಯಲ್ಲಿ ಸುಧೆಯಿಹುದು
ಅದು ಒಸರಿ ಇಳಿವಂತೆ
ದೇವರಾಯನ ಕರುಣೆ
ಹುಗಿಲು ಕೊರೆದಿಹುದಲ್ಲಿ
ಹನಿಹನಿದು ಹನಿಯುತಿದೆ
ಇತ್ತ ಈ ತೊಟ್ಟಿಲಲಿ
ಅಮರಶಿಶು ಅಳುತಲಿದೆ
ತಿನ್ನಲಿಕೆ ಬಾಯಿಹುದು
ಸಹಿಸಲಾಗದೆ ಅಳುತ
ತೊಟ್ಟಿಲಲಿ ತೂಗುತಿದೆ
ಇಂತಿರಲು ಆ ಅಮೃತ
ತನ್ನ ಬಾಯಿಗೆ ಎಂದು
ಎಂತು ಬೀಳುವುದದನು
ತಿಳಿಯುವುದೆ ಆ ಕೂಸು?
ಜೀಕು ನಿಂತಿರಲಾಗ ಲೇಸು! ಲೇಸು !!
*****

ಪುಸ್ತಕ: ಸಾಗರ ಸಿಂಪಿ

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋಲ್ತೆ ಅಲಾವಾ ಖೇಲೈ ಚಲೋ ಜಾ
Next post ಹನಮಂತ ಹಾರಿದಾ ಲಂಕಾ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys